ಮುಗಿದ ಅಧ್ಯಾಯ

ನನ್ನ ಎದೆಯ ಮೀಟಿಮೀಟಿ
ಏನ ಹುಡುಕತಲಿರುವೆ
ಅಲ್ಲಿಲ್ಲ ಯಾವ ಲೋಹದದಿರು
ಹೊನ್ನ ಹೊಂಗನಸು, ಬೆಳ್ಳಿನವಿರು
ಪಚ್ಚೆ ಹವಳದ ಭಾವಗಳು
ಬರಿದು ಬರಿದು, ಈಗಿನ್ನೇನು
ಅಲ್ಲಿಹುದು

ನೀನಿದ್ದೆ ಅಂದು ಅಲ್ಲಿ
ಬರಿ ಛಾಯೆ ಇಂದು ಇಲ್ಲಿ
ಈ ಮನವ ಬಗೆದು ಬಗೆದು
ನೆತ್ತರವ ಹರಿಸಿ
ಏನ ಪಡೆದುಕೊಂಡೆನೇ
ನೀ ಮೊಗೆದಷ್ಟು ಉಕ್ಕಲು
ನಾನೇನು ಶರಧಿಯೇ

ನೀನೇ ಅಳಿಸಿದ ನಿನ್ನ ಚಿತ್ರವ
ಮತ್ತೇ ಬರೆಯುವ ಹುಂಬತನವೇ
ಈ ಹೃದಯವೀಗ
ಬಿಳಿ ಹಾಳೆಯಲ್ಲ

ಯಾಕಿನ್ನು ವ್ಯರ್ಥ ಪ್ರತಾಪ
ಸುಮ್ಮನಿರು ಸಾಕಿನ್ನು
ಗೊಸುಂಬೆಯಂತಹ ಮನಕೆ
ಬೆರಗಾಗಲಾರೆ

ಮುಗಿದ ಅಧ್ಯಾಯವ
ತೆರೆಯಲಾರೆ
ತೊಟ್ಟ ಬಾಣತೊಡದ
ಅವನಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ಹೇಳಿದ್ದು
Next post ತಿರುವನಂತಪುರ ೭೧

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys